ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು

ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದರೆ ಅದನ್ನು
ಮತ್ತೆ ಒಟ್ಟಿಗೆ ಸೇರಿಸಲಿಕ್ಕಾಗುವುದಿಲ್ಲ ಎಂದೆಲ್ಲ
ನೇನೇಕೆ ಹೇಳಲಿ?  ಎಲ್ಲರಿಗೂ ಗೊತ್ತಿರುವ ತೀರ
ಸಾಮಾನ್ಯವಾದ ಸಂಗತಿಗಳನ್ನು ಬಿಟ್ಟುಬಿಡೋಣ.  ಬರೇ
ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ಹೇಗೆ
ಎಂಬುದನ್ನಷ್ಟೆ ನೋಡೋಣ.  ಮೊದಲು
ಒಂದು ಸರಿಯಾಗಿ ಕಳೆತ ಕಲ್ಲಂಗಡಿ ಹಣ್ಣನ್ನು ತೊಳೆದು
ತಟ್ಟೆಯಲ್ಲಿ ಇರಿಸಬೇಕು, ಅಡ್ಡಕ್ಕೋ ಉದ್ದಕ್ಕೋ
ಹೇಗೇ ಇರಿಸಿದರೂ ಅದು ದುಂಡಗೇ ಕುಳಿತುಕೊಳ್ಳುತ್ತದೆ ಬಿಡಿ.
ಆಮೇಲೆ ಹರಿತವಾದ ಒಂದು ಚೂರಿಯಿಂದ
ಅದನ್ನು ಮೇಲಿಂದ ಕೆಳಕ್ಕೆ ಅಥವ ಕೆಳಗಿನಿಂದ
ಮೇಲಕ್ಕೆ ಅಥವ ಎಡದಿಂದ ಬಲಕ್ಕೆ ಅಥವ
ಬಲದಿಂದ ಎಡಕ್ಕೆ ಅಥವ-ನಿಜಕ್ಕೂ ಹೇಳುವುದಾದರೆ
ಒಂದು ಕಲ್ಲಂಗಡಿ ಹಣ್ಣನ್ನು ಕತ್ತಿರುಸುವುದಕ್ಕೆ ಅಸಂಖ್ಯ
ರೀತಿಗಳಿವೆ.  ನನ್ನ ಅಫಘಾನೀಮಿತ್ರನೊಬ್ಬ
ಮಧ್ಯದಿಂದ ಅಡ್ಡಕ್ಕೆ ಕತ್ತರಿಸಿ ಒಳಗಿನ ತಿರುಳನ್ನು
ಚೂರಿಯಿಂದ ಹೆರೆದು ತೆಗೆಯುತ್ತಿದ್ದ.  ಕೆಲವರು ನೀಟಾಗಿ ಕತ್ತರಿಸಿ
ಹೋಳುಗಳನ್ನು ಕಚ್ಚಿ ತಿನ್ನುತ್ತಾರೆ.  ಕೆಲವರು ತಿನ್ನುವ ಮೊದಲು
ಬೀಜಗಳನ್ನು ತೆಗೆಯುತ್ತಾರೆ, ಇನ್ನು ಕೆಲವರು
ತಿನ್ನುವಾಗ ಉಗಿಯುತ್ತಾರೆ.  ನಿಜಕ್ಕೂ ಹೇಳುವುದಾದರೆ
ಒಂದು ಕಲ್ಲಂಗಡಿ ಹಣ್ಣನ್ನು ತಿನ್ನುವುದಕ್ಕೆ ಅನೇಕ
ವಿಧಾನಗಳಿವೆ.  ಎಲ್ಲಕ್ಕಿಂತ ಮುಖ್ಯವೆಂದರೆ-
ಅಥವಾ ನೇನೇಕೆ ಹೇಳಲಿ ಅದನ್ನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಂಕಿಯ ಉಂಡೆ
Next post ಸೂರ್ಯ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys